ನನ್ನ ಕಾಲೇಜಿನೆದುರು
ಯಮಾಲಯದಂತೆ ನಿಂತಿರುವ
ರೋಗಗ್ರಸ್ತ, ಜರ್ಜರ
ಮಹಾಮಹಡಿಯ ಪ್ರಾಚೀನ
ಮಂದಿರದಲ್ಲಿ
ದೇವರಿಲ್ಲ
ಅವನ ಬದಲಿಗೆ
ಅಧಿಕೃತ ಏಜಂಟ್ಗಳಾಗಿ
ಮುದಿ, ತರುಣ ವೈದ್ಯರು
ಗೌರ, ಮೃದು ಭಾವದ ನರ್ಸುಗಳು
ಸೇವೆಯ ಪಣ ಹೊತ್ತು
ಯಾವದೋ ಜನ್ಮದ
ಋಣತೆರುವ ಖಯಾಲಿನಲ್ಲಿ
ದಿನ ರಾತ್ರಿ ಸಾವಿನೊಡನೆ
ಸೆಣಸುವ
ದುಷ್ಕರ್ಮಿಗಳ ನರಳಾಟವನ್ನು
ಅಳಿಸುವ
ಅರೆ ಮನಸ್ಸಿನ ನಿರ್ಧಾರದಿಂದ
ಓಡಾಡುವುದು ಕಾಣುವುದು,
ಯಾವ ಶಾಪವೊ
ಮನುಷ್ಯ ಇಲ್ಲಿ ಬಂದು
ತನ್ನವರಿಂದ ದೂರವಾಗುವ
ನೋವನ್ನು ಉಣ್ಣುತ್ತ
ಬದುಕುವ ಭರವಸೆಯನ್ನು
ಕಾಣದೆ, ಭಯಾತುರನಾಗಿ
ಕಣ್ಣ ಕುಳಿಯಲ್ಲಿರುವ ನಿರಾಶೆಯ ಆಳದಲ್ಲಿ
ಮುಳುಗುತ್ತಿರುವಾಗ
ನಾನು,
ನವುರಾಗಿ ಬಟ್ಟೆಧರಿಸಿದ
ವಿದೇಶೀ ಗಂಧ ಸೂಸುವ
ಯುವ ವೈದ್ಯರು
ಸುರಸುಂದರಿಯೊಂದಿಗೆ
ಅಲ್ಲಲ್ಲಿ ನಿಂತು
ಸರಸವಾಡುವುದನ್ನು ನೋಡುತ್ತೇನೆ.
ಆಗ,
ಈ ಲೋಕವೊಂದು ರುಗ್ದಾಲಯ
ಇಲ್ಲಿ ಬರುವ ಪ್ರತಿಯೊಬ್ಬನೂ
ರೋಗಿ,
ಈ ಮೈಮನಸ್ಸಿನ ರೋಗಕ್ಕೆ
ಪರಿಹಾರ ಎಲ್ಲಿ?
ಎಂಬ ಗುಮಾನಿ ಬಂದು
ಖಿನ್ನ-ಛಿನ್ನನಾಗಿ
ಅಲ್ಲಿಂದ ಹೊರಬೀಳುತ್ತೇನೆ.
*****
Related Post
ಸಣ್ಣ ಕತೆ
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ಆವರ್ತನೆ
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…